Top 100 Kannada Sad Quotes

Here is the list Kannada Sad Quotes. Delve into the realms of melancholy with our handpicked collection of Kannada sad quotes. Experience the raw power of emotions and find solace in shared sorrow.

Best Kannada Sad Quotes

ಹೊರ ಮನಸ್ಸು ಹೇಳುತ್ತೆ ಸಿಟ್ಟಾದವರನ್ನು ಮತ್ತೆ ಮಾತಾಡಿಸಬೇಡ ಅಂತ , ಒಳ ಮನಸ್ಸು ಹೇಳುತ್ತೆ ಯಾರನ್ನು ಕಳೆದುಕೊಳ್ಳಬೇಡ ಅಂತ , ಒಂದು ಕ್ಷಣದ ಕೋಪಕ್ಕೆ ಯಾವ ಸಂಬಂಧವು ಹಾಳಾಗದಂತೆ ನೋಡಿಕೊಳ್ಳಿ.

ನಮ್ಮ ಜೀವನದಲ್ಲಿ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ ಏನಂದ್ರೆ ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇರೋ ವ್ಯಕ್ತಿಗಳಿಗೆ ನಮ್ಮ ಅಮೂಲ್ಯವಾದ ಪ್ರೀತಿ ಕಾಳಜಿ ಕಣ್ಣೀರು ಹಾಗೂ ಮುಖ್ಯವಾಗಿ ಸಮಯವನ್ನು ಮೀಸಲಿಡೋದು.

ಅಳುತ್ತಿರುವಾಗ ಕಣ್ಣೀರು ಒರೆಸಲು ಬಾರದು ಈ ಲೋಕ . ನೀನು ಸತ್ತಾಗ ಮಣ್ಣು ಕೋಡೋಕೆ ಬರುತ್ತೆ ಈ ಲೋಕವನ್ನು ನಂಬಿ ಬದುಕ ಬೇಡ , ” ನಿನ್ನ ನೀನು ನಂಬಿ ಬದುಕು ” , ಏಕಾಂಗಿಯಲೋಕ.

ಪ್ರೀತಿ ನಂಬಿಕೆ , ಯಾವತ್ತೂ ಯಾರ ಹಿಂದೆಯೂ ಹೊಗಬೇಡಿ , ನಿಮ್ಮನ್ನು ಅವರು ನಿಜವಾಗಿಯೂ ಪ್ರೀತಿಸುತ್ತಿದ್ದರೆ , ಒಂದಲ್ಲಾ ಒಂದು ದಿವಸ ಮರಳಿ ಬಂದೇ ಬರುತ್ತಾರೆ ,  ಅಕಸ್ಮಾತ್ ಬರದಿದ್ದರೆ ಇಷ್ಟು ದಿವಸ ನೀವು ಆ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದ್ದೆ ಎಂದು ಭಾವಿಸಿ.

ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ . ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು , ಅದರ ನೆರಳು ಮಾತ್ರ.

ಸಂತಸದ ಸಮಯದಲ್ಲಿ ಚಪ್ಪಾಳೆ ತಟ್ಟುವ ಹತ್ತು ಬೆರಳುಗಳಿಗಿಂತ ದುಃಖದ ಸಮಯದಲ್ಲಿ ಕಣ್ಣಿರು ಒರೆಸುವ ಒಂದು ಬೆರಳು ಶ್ರೇಷ್ಟವಾದದ್ದು……

ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ … ಸಿಗುವ ನೂರು ವಸ್ತುಗಿಂತ ಸಿಗದೇ ಇರೋ ಒಂದು ವಸ್ತು ಮಾತ್ರ ಮನಸ್ಸನ್ನ ಗೆದಿರುತ್ತೆ.

ಯಾರ ಮೇಲು ವಿಶ್ವಾಸನಾ ಇಟ್ಟೋಬೇಡಿ, ಯಾಕಂದ್ರೆ ಯಾರು ಯಾವಾಗ ಹೇಗೆ ಬೇಕಾದ್ರು ಬದಲಾಗಬಹುದು.

ನೀನು ಸಿಗಲಾರೆ ಎಂದು ಬೇಸರವಿಲ್ಲ ನೆನಪಿನ ತೀರದಲ್ಲಿ ನಿನ್ನ ಕುರುಹೂ ಇಲ್ಲ ಆದರೆ ನನ್ನ ಚಪ್ಪಲಿಯನ್ನು ಪ್ರೀತಿಸಿದಿಯೆಲ್ಲ ಎಂಬ ಸಣ್ಣ ರೋದನೆ – ಚಪ್ಪಲಿಗಾಗಿ ಯಜಮಾನನ ತೋಳು ತೋರೆದ ನಿನಗಿದೋ ವಂದನೆ ಅಭಿನಂದನೆ.

ಕಳೆದು ಹೋದ ಆ ನೆನ್ನೆ ಮತ್ತೆ ಎದುರಾದರೆ . ಕರೆ ಹೋದ ಆ ಕನಸು ಮರತೆ ಮಾಡುವುದಾದರೆ ನಿನ್ನುಸಿರಾಟಕ್ಕೆ ನನ್ನೆದೆಯ ಉಯ್ಯಾಲೆ ತೂಗುವುದಾದರೆ ಈ ಸಾಲುಗಳು ನಿನ್ನ ಕಣ್ಣಲೆ ತಾತ್ಸಾರದ ಬದಲು ನಲುಮೆಯ ನಗುವ ತರುವುದಾದರೆ ಈ ಐದುಕು ಕತ್ತಲಲ್ಲಿ ಕರಗುವುದಿಲ್ಲ ನೀ ಮತ್ತೆ ನಿನ್ನೊಶದ ಬೆಳಕ ಚೆಲ್ಲಿದರೆ.

ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು ನಾ ಬರೆಯಲಾಗದೇ ಹೋದ ` ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು.

ಮರಣವನ್ನು ಯಾರು ನೋಡಿಲ್ಲ ಬಹುಶಃ ಅದು ಸುಂದರವಾಗಿರಬಹುದು . ಏಕೆಂದರೆ ಒಮ್ಮೆ ಅದನ್ನು ಭೇಟಿಯಾಗಲು ಹೋದವರು ಮತ್ತೆ ಜೀವಿಸಲು ಮರೆತುಬಿಡುತ್ತಾರೆ.

ಕೆಲವೊಂದು ವಿಷಯಗಳನ್ನ ಹೇಳೋಕು ಆಗಲ್ಲ , ಮನಸಲ್ಲಿ ಮುಚ್ಚಿಟ್ಟುಕೊಳ್ಳೋಕು ಆಗಲ್ಲ ನಾನು ಹೇಳಲ್ಲ ನೀನೆ ಅರ್ಥ ಮಾಡಿಕೊಳ್ಳಬೇಕು.

Kannada Sad Quotes About Life

ನಮಗೆ ಬೆಕಾದವರಿಗೆ ನಮ್ಮಿಂದ ನೋವಗುತ್ತದೆ ಅನ್ನೋದಾದರೆ ನಾವೆ ಅವರಿಂದ ದೂರ ಇರೋದು ಒಳ್ಳೆಯದು ಅಲ್ವಾ…..

ನಿನಗಾಗಿ ಕಾಯುವ ವ್ಯಕ್ತಿ ಒಂದು ಗಂಟೆ ಒಂದು ದಿನ “ನಿರ್ಲಕ್ಷ್ಯ” ಮಾಡು ಪರವಾಗಿಲ್ಲಾ…ಆದರೆ ಪ್ರತಿ ದಿನ ಹಾಗೆ ನಿರ್ಲಕ್ಷ್ಯ ಮಾದಿದರೆ ಯಾವುದೋ ಒಂದು ದಿನ ನೀನು ಬೇಕು ಅಂತ ಕರೆದರು ಬರದಷ್ಟು ದೂರ ಹೋಗಿ ಬಿಡುತ್ತಾರೆ…

ಎಲ್ಲಾ ನನ್ನವರೇ ಎಂದುಕೊಂಡು ಹೋದೆ ಆದರೆ ಕಾಲವೇ ತಿಳಿಸಿತು ನೀನು ಹುಡುಕಿಕೊಂದು ಹೋದವರು ಯಾರು ನಿನ್ನಾವರಲ್ಲಾ ನಿನ್ನನ್ನು ಯಾರು ಹುಡುಕಿಕೊಂಡು ಬರುತ್ಥಾರೋ ಅವರು ಮಾತ್ರ ನಿನ್ನವರು “ಎಂದು”

ಜೀವನದಲ್ಲಿ ಏನು ಕಲಿತೆ ಅಂತ ಗೊತ್ತಿಲ್ಲ ಆದರೆ ನಮ್ಮ ಅತಿಯಾದ ಪ್ರೀತಿ ಇನ್ನೊಬ್ಬರಿಗೆ ಹಿಂಸೆಯಾಗಬಾರದು ಅಂತ ಕಲಿತೆ….

ಎಲ್ಲಾ ಕಾಯಿಲೆಗಳಿಗೆ ಎರಡು ಔಷಧಿಗಳಿವೆ : ಸಮಯ ಮತ್ತು ಮೌನ.

ನೀವು ಎಷ್ಟು ಹೆಚ್ಚು ಪ್ರೀತಿಸುತ್ತೀರೋ, ಅಷ್ಟು ಹೆಚ್ಚು ಅಳುತ್ತೀರಿ.

ಎಲ್ಲವೂ ಸರಿಯಿಲ್ಲದಿರುವಾಗ ಯಾವುದು ತಪ್ಪು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ.

ನೀವು ಎಂದಾದರೂ ಯಾರಿಂದಾದರೂ ತಿರಸ್ಕರಿಸಲ್ಪಟ್ಟರೆ, ಚಿಂತಿಸಬೇಡಿ ಸಮಸ್ಯೆ ನಿಮ್ಮದಲ್ಲ ಆ ವ್ಯಕ್ತಿಯಲ್ಲಿದೆ ಎಂದು ಭಾವಿಸಿ.

ಯಾರಾದರೂ ನಿಮ್ಮನ್ನು ಬಯಸುತ್ತಾರೆ ಎಂದರೆ, ಅವರು ನಿಮ್ಮನ್ನು ಗೌರವಿಸುತ್ತಾರೆ ಎಂದು ಅರ್ಥವಲ್ಲ.

ಸಮಯಕ್ಕೆ ಹಳೆಯ ಗಾಯಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.

ನಂಬಿಕೆಯು ಎರೇಸರ್‌ ಇದ್ದಂತೆ, ಪ್ರತಿ ತಪ್ಪಿನ ನಂತರ ಅದು ಚಿಕ್ಕದಾಗುತ್ತಾ ಹೋಗುತ್ತದೆ.

ನಾವು ಏನು ಅಂದುಕೊಳ್ಳುತ್ತೇವೆಯೋ ಹಾಗೇ ಆಗುತ್ತೇವೆ.

ನಾನು ಹಿಂದೆ ಇದ್ದ ವ್ಯಕ್ತಿ ಅಲ್ಲ ಎಂದು ನಾನು ಈಗ ಅರಿತುಕೊಂಡೆ.

ನನ್ನ ಜೀವನದಲ್ಲಿ ಬಂದ ಎಲ್ಲ ಕೆಟ್ಟ ಜನರಿಗೆ ನಾನು ಕೃತಜ್ಞನಾಗಿದ್ದೇನೆ, ನಾನು ಯಾರಾಗಬೇಕೆಂದು ಬಯಸುವುದಿಲ್ಲ ಎಂದು ಅವರು ನನಗೆ ತೋರಿಸಿದ್ದಾರೆ.

ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮನ್ನು ನೋವಿಸುವ ಅಧಿಕಾರ ಯಾರಿಗೂ ಇಲ್ಲ.

ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಳ್ಳುವ ನೋವನ್ನು ಗುಣಪಡಿಸಲು ಸಾಧ್ಯವಿಲ್ಲ.

ನಾನು ನಿನ್ನನ್ನು ಕಳೆದುಕೊಳ್ಳುವವರೆಗೂ ದುಃಖ ಏನೆಂದು ನನಗೆ ತಿಳಿದಿರಲಿಲ್ಲ.

ನೀವು ನಿಯಂತ್ರಿಸಲಾಗದ ವಿಷಯಗಳ ಬಗ್ಗೆ ಚಿಂತಿಸಬೇಡಿ. ನೀವು ನಿಯಂತ್ರಿಸಬಹುದಾದ ವಿಷಯಗಳ ಬಗ್ಗೆ ಗಮನ ನೀಡಿ.

ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ, ನಮಗೆ ಪಾಠ ಕಲಿಸಲು.

Kannada Sad Quotes Text

ನಿಮ್ಮ ಹಿಂದಿನದನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಬಹುದು.

ಕೆಲವೊಮ್ಮೆ ನಮ್ಮ ದುಃಖಕ್ಕೆ ಕಾರಣ, ಗುಣವಾಗಲು ಕೂಡ ಕಾರಣವಾಗಿರುತ್ತದೆ.

ಬಲವಾಗಿರಿ ಮತ್ತು ನಿಮ್ಮ ಭಾವನೆಗಳು ನಿಮ್ಮ ನೆಮ್ಮದಿ ಹಾಳು ಮಾಡಲು ಬಿಡಬೇಡಿ.

ನಂಬಿಕೆಯು ಕನ್ನಡಿಯಂತೆ, ಒಮ್ಮೆ ಅದು ಒಡೆದು ಹೋದರೆ, ನೀವು ಅದನ್ನು ಸರಿಪಡಿಸಲು ಸಾಧ್ಯವಿಲ್ಲ.

ಒಂದು ಸುಳ್ಳು ನಿಮ್ಮ ನಮ್ಮ ಎಲ್ಲಾ ಸತ್ಯಗಳ ಬಗ್ಗೆ ಸಂದೇಹ ಮೂಡುವಂತೆ ಮಾಡುತ್ತದೆ.

ಕೆಟ್ಟ ಸಮಯವನ್ನು ಅನುಭವಿಸುತ್ತಿರುವ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿ, ಅವರನ್ನು ಸಮಾಧಾನಪಡಿಸಿ ಮತ್ತು ಅದರಿಂದ ಹೊರಬರುವ ಶಕ್ತಿಯನ್ನು ನೀಡಿ.

ಸತ್ಯವು ಕಹಿ ಮತ್ತು ದುಃಖಕರವಾಗಿದೆ ಆದರೆ ಅದು ನಿಮ್ಮ ಉತ್ತಮ ಆವೃತ್ತಿಯಾಗಲು ಸಹಾಯ ಮಾಡುತ್ತದೆ.

ದುಃಖವು ನಿಮ್ಮನ್ನು ತುಂಬಾ ದೂರವಿರಿಸುತ್ತದೆ, ನೀವು ಅದರಿಂದ ಹೊರಬಂದರೆ ನೀವು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿರುತ್ತೀರಿ.

ನೀವು ಏಕಾಂಗಿಯಾಗಿ ಮಾಡಲಾಗದ ಕೆಟ್ಟ ಸಮಯಗಳನ್ನು ಎದುರಿಸಲು ಪ್ರಾರ್ಥನೆಗಳು ನಿಮಗೆ ಸಹಾಯ ಮಾಡುತ್ತವೆ.

ಹವ್ಯಾಸಗಳು ಮತ್ತು ಆಸಕ್ತಿಗಳು ನಿಮ್ಮ ಮನಸ್ಸನ್ನು ನೀವು ಅನುಭವಿಸುತ್ತಿರುವ ದುಃಖದಿಂದ ದೂರವಿರಿಸುತ್ತದೆ.

ನಿಮಗೆ ದುಃಖವೆನಿಸಿದಾಗ ಹಾಡುಗಳನ್ನು ಆಲಿಸಿ, ಅದು ಗುಣಪಡಿಸುವುದಿಲ್ಲ ಆದರೆ ನಿಮ್ಮ ದುಃಖವನ್ನು ಕಡಿಮೆ ಮಾಡುತ್ತದೆ.

Kannada Sad Quotes about Love

Kannada Sad Quotes about Love

ಪಾಪಿ ಹೃದಯ ಯಾವುದು ಸಿಗಲ್ಲ ಅಂತ ಗೊತ್ತಿರುತ್ತೋ ಅದನ್ನೇ ಇಷ್ಟಪಡುತ್ತೇ..

ನಗಬೇಕೆಂಬ ಆಸೆ ನೂರಿದೆ, ಆದರೆ ನಗಲಾರದಷ್ಟು ನೋವು ಮನದಲ್ಲಿದೆ..

ಪರಿಚಯವೇ ಇಲ್ಲವೆಂಬಂತೆ ನಟಿಸೋರಿಗೆ ಅಪರಿಚಿತರಾಗಿರೋದೇ, ಒಳ್ಳೆಯದು..

ಜಾತಿಯೊಳಗೆ ಮಿಂದು, ಜನರಿಂದ ಸತ್ತುಹೋದ ಪ್ರೀತಿ ನನ್ನದು.

ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ, ಮನಸ್ಸಿಗೆ ಅದು ಇಷ್ಟ ಇಲ್ಲ,
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ,
ಸಿಗೊ ಯಾರೋ ನೀನಾಗಿರಲ್ಲ . . .

ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರೂ,
ಅವರ ಬದುಕಿನಲ್ಲಿ ನಾವು ಹೊರಗಿನವರೇ . . .

ನಿನ್ನೆಯ ನೆನಪುಗಳ, ನಾಳೆಯ ಕನಸುಗಳ,
ನಡುವಿನ ಈ ಉಸಿರಿಗಿರುವ,
ಹೆಸರ ನೆನಪಿಸಿಕೋ ಮತ್ತೊಮ್ಮೆ,
ಮರೆಯಲಾಗದೆ . .

ನಾವು ಯಾರ MSGಗಾಗಿ ದಿನವಿಡೀ ಕಾಯುತ್ತಾ ಇರುತ್ತೀವೋ,
ಅವರು ನಮಗೋಸ್ಕರ 1% ಕೂಡ ಯೋಚನೆ ಮಾಡಲ್ಲ..

ನಮ್ಮನ್ನು ದೂರ ಮಾಡ್ತಾ ಇದ್ದಾರೆ ಅಂದ್ರೆ, ಅವರಿಗೆ ಇನ್ನೊಬ್ಬರು ಹತ್ತಿರವಾಗಿದ್ದಾರೆ ಅಂತ ಅರ್ಥ…

ಅಂದು ನೀನಿದ್ದೆ, ಆದರೆ ನಿನ್ನ ಬಗ್ಗೆ ಬರೆಯಲು ಪದಗಳಿರಲಿಲ್ಲ ನನ್ನಲ್ಲಿ…. ಇಂದು ಪದಗಳಿವೆ, ಆದರೆ ನೀನಿಲ್ಲ …..

ನಮ್ಮವರೇ ನಮ್ಮನ್ನ ಸರಿಯಾಗಿ ಅರ್ಥಮಾಡಿಕೊಳ್ಳಲ್ಲ, ಇನ್ನು ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ, ಅನ್ನೋದು ಬರೀ ಭ್ರಮೆ…

ಜಗತ್ತಿನ ಅತಿ ದೊಡ್ಡ ಡ್ರಾಮಾ ಈ ಕಿತ್ತೊದ್ ಪ್ರೀತಿ -ಪ್ರೇಮ

ನೀನೇ ನನ್ನ ಪ್ರಾಣ ಅಂದುಕೊಂಡಿದ್ದೆ, ಆದರೆ ಇವತ್ತು ಆ ಪ್ರಾಣನೇ ಸತ್ತು ಹೋಗಿದೆ…

ಈ ಲವ್ ಹೆಂಗಂದ್ರೇ ಮಾತಾಡಿದ್ರೆ ಜಗಳ ಬರುತ್ತೆ, ಮಾತಾಡಲಿಲ್ಲ ಅಂದ್ರೆ ಅಳು ಬರುತ್ತೆ..

ಯೋಚನೆ ಮಾಡಬೇಡ, ನಾನು ಮತ್ತೆ ನಿನ್ನ ಜೀವನದಲ್ಲಿ ಬರುವುದಿಲ್ಲ, ನನ್ನಿಂದ ನಿನ್ನ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸು..

ಮಸಣದಲ್ಲಿ ಮನೆಮಾಡಿ ಜೀವಿಸು ಪರವಾಗಿಲ್ಲ, ಆದರೆ ಮನಸ್ಸಿಲ್ಲದವರ ಹತ್ತಿರ ಯಾವತ್ತು ಜೀವನ ಮಾಡ್ಬೇಡ..

Kannada Sad Quotes for Instagram – Kannada sad quotes for whatsapp

ಮನಸ್ಸಿನ ನ್ಯಾಯಾಲಯದಲ್ಲಿ ಮನಸಾಕ್ಷಿಯೇ ನ್ಯಾಯಾಧೀಶ…

ಪ್ರೀತಿ ಎಂದರೆ ಎರಡು ತುದಿಗಳಲ್ಲಿ ಎರಡು
ಜನರು ಹಿಡಿದಿರುವ ರಬ್ಬರ್ ಬ್ಯಾಂಡ್‌ನಂತೆ,
ಒಬ್ಬರು ಅದನ್ನು ತೊರೆದಾಗ, ಇನ್ನೊಬ್ಬರು ಗಾಯಗೊಳ್ಳುತ್ತಾರೆ.

ಯಾರೋ ಅಪರಿಚಿತರು ಕೊಟ್ಟ ನೋವನ್ನು ಎರಡು ದಿನಗಳಲ್ಲಿ ಮರೆಯಬಹುದು, ಆದರೆ ನಮ್ಮ
ಬಗ್ಗೆ ಎಲ್ಲ ತಿಳಿದಿರುವ ನಮ್ಮವರೇ ಕೊಟ್ಟ ನೋವನ್ನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ..

ಕಣ್ಮಂದೆಯಿರೋ ಗೆಳೆಯನಿಗೆ ಬೈಯೋದು ಸ್ನೇಹ,
ಕಣ್ಣಾಮುಚ್ಚಾಲೆ ಆಟ ಆಡಿ ಬಿಟ್ಟ ಹೋಗಿರೋ
ಹುಡ್ಗಿಗೆ ಬೈಯೋದು ಕುಲಗೆಟ್ಟ ಪ್ರೇಮ.

ಹುಡುಗಿಯ ಪ್ರೀತಿಗಾಗಿ ಪ್ರಾಣ ಬಿಟ್ಟವರು ಸಾವಿರ ಜನ,
ಒಡಹುಟ್ಟಿದವರ ಪ್ರೀತಿಗಾಗಿ ಬೆಲೆತೆತ್ತವರು ಕೆಲವು ಜನ..

ಪ್ರೀತಿಲಿ ಸೋತಿರೋ ದೇಹ ತನ್ನ ನೆರಳಿನ ದಾರಿ ಕೂಡ ಮರಿಯುತ್ತೆ,
ಪ್ರೀತಿಲಿ ಗೆದ್ದಿರೋ ಮನಸ್ಸು ತಪ್ಪು ದಾರಿಯಲ್ಲೂ ಸರಿ ದಾರಿ ತೋರುತ್ತೆ..

ಅಳು, ನಗು, ಹಂಗೂ, ಹಂಬಲ ಎಲ್ಲಾನೂ ಪ್ರೀತಿ ಕಲಿಸುತ್ತೆ,
ಆದರೆ ಜೀವನ ಮಾಡುವುದನ್ನು ಬಿಟ್ಟು..

ಎದೆಯ ಗರ್ಭದಲ್ಲಿ ಉಸಿರಾಡಿದ ಪ್ರೀತಿಯು ಆ ಎದೆಯನ್ನೇ ಒಡೆಯುವಷ್ಟು ಕ್ರೂರವಾಗಿರುತ್ತೆ ಹುಷಾರಾಗಿರಬೇಕು..

ಪ್ರೀತಿಯಲ್ಲಿರುವವರಿಗೆ ಈ ಜಗತ್ತು ಸುಂದರವಾಗಿ ಕಾಣುತ್ತೆ,
ಪ್ರೀತಿಯಲ್ಲಿ ಸೋತವರಿಗೆ ಅದೇ ಸುಂದರವಾದ ಜಗತ್ತು ಶೂನ್ಯವಾಗಿ ಕಾಣುತ್ತೆ..

ಪ್ರೀತಿ ಒಂಥರಾ ಅತಿ ಸುಂದರ ಅನುಭವ,
ಅದನ್ನು ಅನುಭವಿಸಿದಷ್ಟು ಅದರ ಆಳ ತಿಳಿಯುತ್ತೆ..

ಈ ಜಗತ್ತಿನಲ್ಲಿ ಪ್ರೀತಿ ಬಗ್ಗೆ ಅದರಲ್ಲಿ ಗೆದ್ದವರು ಹೇಳೋದಕ್ಕಿಂತ
ಪ್ರೀತಿಯಲ್ಲಿ ಸೋತವರು ಚೆನ್ನಾಗಿ ಹೇಳ್ತಾರೆ ಕೇಳು..

ಪ್ರೀತಿ ಪ್ರೇಮ ಜೀವನದಲ್ಲಿ ಎಷ್ಟು ಸುಖ ಕೂಡುತ್ತೋ,
ಅಷ್ಟೇ ದುಃಖ ಕೂಡುತ್ತೇ ಹುಷಾರಾಗಿರಬೇಕು..

ಎಲ್ಲರ ಪ್ರೀತಿಯೂ ನಿಜವಾಗಿರಲ್ಲಾ,
ನಿಜವಾಗಿರೋ ಪ್ರೀತಿಯು ಎಂದಿಗೂ ದೂರ ಆಗಲ್ಲಾ..

ನಿಜವಾದ ಪ್ರೀತಿಯು ಅಮೃತದಂತೆ ಎಲ್ಲಾ ಕಡೆಯೂ ಸಿಗಲ್ಲಾ,
ಸುಳ್ಳು ಪ್ರೀತಿ ಗಾಳಿಯಂತೆ ಎಲ್ಲೆಲ್ಲಿಯೂ ಹರಡಿರುತ್ತೆ..

We hope you enjoyed reading above Kannada Sad Quotes. Read More Kannada Quotes here.